ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಭರದಲ್ಲಿ ತಮಿಳುನಾಡಿನ ಪತ್ರಕರ್ತನೊಬ್ಬ ಕನ್ನಡ ಚಿತ್ರರಂಗದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ. ಸುದೀಪ್ತೊ ಮಂಡಲ್ ಎನ್ನುವ ಪತ್ರಕರ್ತ, ಇತ್ತೀಚೆಗೆ ಚೇತನ್ ಅವರು ಜಾತಿ ವ್ಯವಸ್ಥೆ ಬಗ್ಗೆ ಬರೆದಿದ್ದ ಲೇಖನ ಪ್ರಕಟವಾಗಿರುವ ಡೆಕ್ಕನ್ ಹೆರಾಲ್ಡ್ ವೆಬ್ಸೈಟ್ ಲಿಂಕ್ ಒಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ, ‘ದಕ್ಷಿಣ ಭಾರತದಲ್ಲಿ ಅತೀ ಕೆಟ್ಟ ಚಿತ್ರೋದ್ಯಮವಾಗಿರುವ